ಕರ್ನಾಟಕ     ಬಳ್ಳಾರಿ     ತಾಲೂಕ ಸಂದುರ್


ಒಂದು ಸಮುದಾಯವೆಂದರೆ, ಒಂದೇ ವಿಧದ ಉತ್ಪನ್ನಗಳನ್ನು ಉತ್ಪಾದಿಸುವ ಮತ್ತು ಸಾಮಾನ್ಯವಾದ ಅವಕಾಶಗಳು ಮತ್ತು ಅಪಾಯಗಳನ್ನು ಎದುರಿಸುತ್ತಿರುವ ಘಟಕಗಳ ಭೌಗೋಳಿಕ (ನಗರ/ಪಟ್ಟಣ/ಕೆಲವು ಅಕ್ಕಪಕ್ಕದ ಹಳ್ಳಿಗಳ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಕುಶಲಕರ್ಮಿಗಳ ಸಮುದಾಯವೆಂದರೆ, ಕರಕುಶಲ/ಕೈಮಗ್ಗ ಉತ್ಪನ್ನಗಳನ್ನು ಉತ್ಪಾದಿಸುವ ಗೃಹ ಸ್ಥಾಪಿತ ಘಟಕಗಳ ಭೌಗೋಳಿಕ (ಮುಖ್ಯವಾಗಿ ಹಳ್ಳಿಗಳಲ್ಲಿನ/ಪಟ್ಟಣ ಪ್ರದೇಶಗಳಲ್ಲಿನ) ಸಾಂದ್ರಣ(ಕೇಂದ್ರೀಕರಣ)ವೆಂದು ಅರ್ಥೈಸಬಹುದು. ಒಂದು ಮಾದರಿ ಸಮುದಾಯದಲ್ಲಿ, ಇಂತಹ ಉತ್ಪಾದಕರು, ಸಾಮಾನ್ಯವಾಗಿ, ಅನೇಕ ತಲೆಮಾರುಗಳಿಂದ ಸ್ಥಾಪಿತವಾದ ಉತ್ಪನ್ನಗಳನ್ನು ಉತ್ಪಾದಿಸುತ್ತಾ ಬಂದಿರುವ ಸಾಂಪ್ರದಾಯಿಕ ಕೋಮಿಗೆ ಸೇರಿದವರಾಗಿರುತ್ತಾರೆ. ವಾಸ್ತವವಾಗಿ, ಬಹುತೇಕ ಕುಶಲಕರ್ಮಿ ಸಮುದಾಯಗಳು ಶತಮಾನಗಳಷ್ಟು ಹಳೆಯ ಕುಶಲಕರ್ಮಿಗಳು.

ಸಂಡೂರು ತಾಲ್ಲೂಕಿನ ಸಮುದಾಯದ ಬಗ್ಗೆ:-

ಸಂಡೂರು ತಾಲ್ಲೂಕಿನ ಸಮುದಾಯವು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಡಿ ಬರುತ್ತದೆ.

ಸಂಡೂರು ತಾಲ್ಲೂಕಿನ ಸಮುದಾಯವು ತನ್ನ ಪ್ರಬಲ ಕಾರ್ಮಿಕ ಬಲಕ್ಕೆ ಆಧಾರವನ್ನು ಒದಗಿಸಲು 250ಕ್ಕೂ ಅಧಿಕ ಕುಶಲಕರ್ಮಿಗಳನ್ನು ಮತ್ತು 22 ಸ್ವಸಹಾಯ ಗುಂಪುಗಳನ್ನು ರಚಿಸಲು ಶಕ್ತವಾಗಿದೆ. ಈ ಒಟ್ಟುಗೂಡಿಸುವಿಕೆಯು ದಿನೇ ದಿನೇ ಸಂವೇಗವನ್ನು ಗಳಿಸುತ್ತದೆ.

ಕಸೂತಿ ಕೆಲಸ:-

ಜಾಮಿತಿಯ ನಮೂನೆಗಳ ಮತ್ತು ವಿನ್ಯಾಸಗಳ ಬಣ್ಣಗಳನ್ನು ಮತ್ತು ಹೊಲಿಗೆಗಳನ್ನು ಮಾರ್ಪಡಿಸುವ ಮೂಲಕ ನೇಯ್ಗೆಯ ಪರಿಣಾಮವನ್ನು ಪಡೆಯಲಾಗುತ್ತದೆ. ಹುರುಳುಗಳನ್ನು ಸಾಮಾನ್ಯವಾಗಿ ಕಸೂತಿ ಕೆಲಸದ ಅಡ್ಡ-ಹೊಲಿಗೆಯ ಶೈಲಿಯಿಂದ ಸ್ವಾರಸ್ಯಭರಿತಗೊಳಿಸಲಾಗುತ್ತವೆ. ಕೈಚೀಲದ ತುದಿಗಳ ಉದ್ದಕ್ಕೂ ಇರುವ ಅಂಚು ಸತತವಾದ ಮಾದರಿಯನ್ನು ಹೊಂದಿರುವುದಿಲ್ಲ ಆದರೆ ದಾರಗಳ ಎಣಿಕೆಯನ್ನು ಮಾರ್ಪಡಿಸುವ ಮೂಲಕ ಮಾಡಲಾದ ಒಂದು ಮಾದರಿಯನ್ನು ಒಳಗೊಂಡಿರುತ್ತದೆ ಹಾಗೂ ಲಂಬ ಹೊಲಿಗೆಗಳ ಮೂಲಕ ಕೋನೀಯ ವಿನ್ಯಾಸಗಳನ್ನು ಪಡೆಯಲಾಗುತ್ತದೆ.

ಕಸೂತಿ ಕೆಲಸ ಎಂಬ ಪದವನ್ನು ಸಾಮಾನ್ಯವಾಗಿ ಒಂದು ತುಂಡು ಬಟ್ಟೆಯನ್ನು ಸೂಜಿಗೆಲಸದಿಂದ ಅಥವಾ ಅಭಿರುಚಿಯುಳ್ಳ ವಿವರಗಳಿಂದ ಅಲಂಕರಿಸುವ ವಿಧಾನವೆಂದು ಬಣ್ಣಿಸಬಹುದು. ಹೀಗೆ ಕಸೂತಿ ಕೆಲಸವನ್ನು ಸೂಜಿ ಮತ್ತು ದಾರವನ್ನು ಉಪಯೋಗಿಸಿ ಜವಳಿಗಳನ್ನು ಅಲಂಕರಿಸುವ ಕಲೆ ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕದ ಕಸೂತಿ ಕೆಲಸವು ತನ್ನ ಕುಶಲಕರ್ಮಿಗಳ ಸೃಷ್ಟಿಗಳ ಚಾತುರ್ಯತೆಯಿಂದಾಗಿ ಖ್ಯಾತಿಯನ್ನು ಗಳಿಸಿದೆ. ಕರ್ನಾಟಕದ ಕುಶಲಕರ್ಮಿಗಳು ವಸ್ತುಗಳನ್ನು ಅಲಂಕರಿಸಲು ಹೊಲಿಗೆಗಳ ಅನೇಕ ಓರಣಗಳನ್ನು ಉಪಯೋಗಿಸುತ್ತಾರೆ. ಕರ್ನಾಟಕದ ಕಸೂತಿ ಕೆಲಸದ ಅತಿ ಮುಖ್ಯವಾದ ಕೇಂದ್ರಗಳು ಬಳ್ಳಾರಿ ಪ್ರದೇಶಗಳಲ್ಲಿವೆ ಮತ್ತು ಇವು ಕ್ರಿಯಾತ್ಮಕ ಉತ್ಕೃಷ್ಟತೆಗಾಗಿ ಮೆಚ್ಚುಗೆಯನ್ನು ಗಳಿಸಿವೆ. ಅನೇಕ ಇತರ ಸಮುದಾಯಗಳಿಗೆ ಕರ್ನಾಟಕದ ಕಸೂತಿ ಕೆಲಸವು ಆದಾಯದ ಮುಖ್ಯ ಮೂಲಗಳಲ್ಲಿ ಒಂದಾಗಿದೆ. ಇಂದು, ಕಸೂತಿ ಕೆಲಸವು ಬಟ್ಟೆಗಳನ್ನು ಅಲಂಕರಿಸುವ ಹಲವು ಸಾಂಪ್ರದಾಯಿಕ ವಿಧಾನಗಳಲ್ಲಿ ಒಂದಾಗಿದ್ದರೂ, ಅದು ಇಂದಿಗೂ ಅಷ್ಟೇ ಹೆಸರುವಾಸಿಯಾಗಿದೆ. ಪ್ರಾಚೀನ ಕಾಲದ ವಿನ್ಯಾಸಗಳಾಗಿರಬಹುದು, ಅಥವಾ ನವೀನ ಕಾಲದ ಹೊಸ ಜಾಮಿತಿಯ ವಿನ್ಯಾಸಗಳಾಗಿರಬಹುದು, ಇಂದಿಗೂ ಕಸೂತಿ ಕೆಲಸವು ಬಟ್ಟೆಗಳನ್ನು ಅಲಂಕರಿಸುವ ಸಾಮಾನ್ಯ ವಿಧಾನಗಳಲ್ಲಿ ಒಂದಾಗಿಯೇ ಮುಂದುವರೆದಿದೆ. ನಿಜ ಹೇಳಬೇಕೆಂದರೆ, ತಜ್ಞರ ಪ್ರಕಾರ, ಇಂದಿನ ಸ್ವೀಕೃತಿಯ ಮಟ್ಟದಿಂದಾಗಿ, ಈಗ ಕ್ರಿಯಾತ್ಮಕತೆ ಮತ್ತು ಹೊಸ ಕಲ್ಪನೆಗೆ ಇನ್ನೂ ಹೆಚ್ಚಿನ ಅವಕಾಶವಿದೆ.

ಇದು ಟಿಕ್ರಿಗಳು ಮತ್ತು ಮಣಿಗಳ ಅಲಂಕಾರವನ್ನು ಹೊಂದಿದ್ದು, ಇವು ಅವುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಈ ವಿಧದ ಕಸೂತಿ ಕೆಲಸವನ್ನು ಮರದ ಕಂಬಿಗಳ ಚೌಕಟ್ಟಿನ ಮೇಲೆ ಮಾಡಲಾಗುತ್ತದೆ . ವಸ್ತ್ರದ ಮೇಲೆ ಉದ್ದನೆಯ ಸೂಜಿ, ದಾರಗಳು, ಟಿಕ್ರಿಗಳು ಮತ್ತು ಮಣಿಗಳಿಂದ ಕಸೂತಿ ಮಾಡಲಾಗಿರುತ್ತದೆ. ಸಾಮಾನ್ಯವಾಗಿ ಸುಮಾರು 1.5 ಅಡಿ ಎತ್ತರದ ವಿವಿಧ ಗಾತ್ರದ ಚೌಕಟ್ಟುಗಳನ್ನು ಉಪಯೋಗಿಸಿ ಬಟ್ಟೆಯನ್ನು ಭದ್ರಪಡಿಸಿ, ಅಚ್ಚು ಹಾಕುವ ತಗಡಿನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಒಂದು ಕೈ ಬಟ್ಟೆಯ ಕೆಳಗಿರುವ ದಾರವನ್ನು ಸೂಜಿಗೆ ಭದ್ರಪಡಿಸುತ್ತದೆ ಹಾಗೂ ಮತ್ತೊಂದು ಕೈ ಸೂಜಿಯನ್ನು ಬಟ್ಟೆಯ ಮೇಲೆ ಸುಲಭವಾಗಿ ಹರಿದಾಡಿಸುತ್ತದೆ. ಅಲಂಕಾರಿಕ ಟಿಕ್ರಿಗಳು ಮತ್ತು ಮಣಿಗಳನ್ನು ಸೂಜಿಯಿಂದ ಬಟ್ಟೆಗೆ ಸೇರಿಸಲಾಗುತ್ತದೆ.

ಮತ್ತೊಂದು ಕಸೂತಿ ಕೆಲಸದ ಮಾದರಿಯೆಂದರೆ ಜಾಲಿ ಅಥವಾ ಜಾಮಿತಿಯ ಅಥವಾ ಹೂವಿನಂತಹ ಆಕಾರಗಳ ಬಲೆಯ ಕಸೂತಿ ಕೆಲಸ ಮತ್ತು ನೇಯ್ಗೆಯ ದಪ್ಪ ಮತ್ತು ಸಣ್ಣ ದಾರಗಳನ್ನು ಎಳೆದು ಸೂಕ್ಷ್ಮವಾದ ಗುಂಡಿರಂಧ್ರದ ಹೊಲಿಗೆಗಳಿಂದ ಅವುಗಳನ್ನು ಅಂಟಿಸಲಾಗುತ್ತದೆ. ತಯಾರಾದ ಉತ್ಪನ್ನಗಳಲ್ಲಿ ಪ್ರಮುಖವಾಗಿ ಕಾಣಸಿಗುವುದು ಗೃಹಬಳಕೆಯ ಪದಾರ್ಥಗಳಾದ ಪರದೆಗಳು, ದುಪ್ಪಟೆಗಳು, ಮನೆಮಟ್ಟುಗಳು ಮತ್ತು ಉಡುಪಿನ ಬಟ್ಟೆಗಳು.

ಉಪಯೋಗಿಸಲಾದ ಕಚ್ಛಾ ವಸ್ತುಗಳು:-

ವಸ್ತ್ರದ ಮೇಲೆ ಉದ್ದನೆಯ ಸೂಜಿ, ದಾರಗಳು, ಟಿಕ್ರಿಗಳು ಮತ್ತು ಮಣಿಗಳಿಂದ ಕಸೂತಿ ಮಾಡಲಾಗಿರುತ್ತದೆ. ಸಾಮಾನ್ಯವಾಗಿ ಸುಮಾರು 1.5 ಅಡಿ ಎತ್ತರದ ವಿವಿಧ ಗಾತ್ರದ ಚೌಕಟ್ಟುಗಳನ್ನು ಉಪಯೋಗಿಸಿ ಬಟ್ಟೆಯನ್ನು ಭದ್ರಪಡಿಸಿ, ಅಚ್ಚು ಹಾಕುವ ತಗಡಿನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಒಂದು ಕೈ ಬಟ್ಟೆಯ ಕೆಳಗಿರುವ ದಾರವನ್ನು ಸೂಜಿಗೆ ಭದ್ರಪಡಿಸುತ್ತದೆ ಹಾಗೂ ಮತ್ತೊಂದು ಕೈ ಸೂಜಿಯನ್ನು ಬಟ್ಟೆಯ ಮೇಲೆ ಸುಲಭವಾಗಿ ಹರಿದಾಡಿಸುತ್ತದೆ.

ಕಾರ್ಯವಿಧಾನವನ್ನು ಅನುಸರಿಸಲು ಕಸೂತಿಕೆಲಸವು ಒಂದು ತಾಂತ್ರಿಕ ಕುಶಲಕರ್ಮವಲ್ಲದಿದ್ದರೂ ಕೆಳಗಿನಂತೆ ಒಂದು ಚಿಕ್ಕ ಕ್ರಮವನ್ನು ಅನುಸರಿಸಬೇಕಿದೆ:

1. ಖಾಖಾದಂತೆ ಏಕರೂಪತೆ ಮತ್ತು ಅನುರೂಪತೆಗಾಗಿ ಜಾಡಿನ ಪರದೆಯ ಮೇಲೆ ನಮೂನೆಯನ್ನು ಮಾಡಲಾಗುತ್ತದೆ

2. ಕಸೂತಿಕೆಲಸಕ್ಕಾಗಿ ಒಂದು ಗುರುತಿಸುವ ಮಿಶ್ರಣ(ದ್ರವ)ದಿಂದ ಬಟ್ಟೆಯ ಮೇಲೆ ನಮೂನೆಗಳನ್ನು ಗುರುತಿಸಲಾಗುತ್ತದೆ.

3. ಮರದ ಚೌಕಟ್ಟಿನ(ಚೌಕಟ್ಟು ಇಲ್ಲದಿದ್ದರೂ ಇದನ್ನು ಮಾಡಬಹುದು) ಮೇಲೆ ಈಗ ಎಲ್ಲಾ ದಿಕ್ಕಿನಿಂದಲೂ ಗುರುತಿಸಿದ ಬಟ್ಟೆಯನ್ನು ತುಂಬಾ ಬಿಗಿಯಾಗಿ ಇಡಬೇಕು (ಸೀರೆ,ಬಟ್ಟೆಯ ತುಂಡುಗಳು,ಇತ್ಯಾದಿ.).

4. ಚೌಕಟ್ಟಿನ ಸಹಾಯದಿಂದ ಕಸೂತಿಕೆಲಸ ಮಾಡುವುದು ಸುಲಭಕರ ಏಕೆಂದರೆ ಅದು ಒತ್ತಡವನ್ನು ಕಡಿಮೆಗೊಳಿಸುತ್ತದೆ ಮತ್ತು ಉತ್ಪನ್ನವು ಗಂಟುರಹಿತವಾಗಿರುತ್ತದೆ.

5. ಇಚ್ಛಿಸಿದ ನಮೂನೆಯನ್ನು ಪಡೆಯಲು ವಿಭಿನ್ನ ಹೊಲಿಗೆಗಳೊಂದಿಗೆ(ಪಕ್ಕೋ, ಕಚ್ಛೋ, ಸೂಫ್, ರಬಾರಿ, ಖಾರೆಕ್ ಇತ್ಯಾದಿ) ನಮೂನೆಯನ್ನು ಸುಂದರವಾಗಿ ಕಸೂತಿಗೊಳಿಸಲಾಗುತ್ತದೆ.

6. ಇದರ ಪರಿಣಾಮ ಅನೇಕ ಬಣ್ಣಗಳಾಗಿರಬಹುದು ಮತ್ತು ಮಾಡಲು ಸುಲಭವಾಗಿದೆ.

ಉತ್ಪನ್ನಕ್ಕೆ ಬೇಕಾದಷ್ಟು ಜಾಗವನ್ನು ಬಿಟ್ಟು, ವಿನ್ಯಾಸಕ್ಕೆ ತಕ್ಕಂತೆ ಮರದ ಚೌಕಟ್ಟಿನ(ಚೌಕಟ್ಟು ಇಲ್ಲದಿದ್ದರೂ ಇದನ್ನು ಮಾಡಬಹುದು) ಮೇಲೆ ಬಟ್ಟೆಯನ್ನು ತುಂಬಾ ಬಿಗಿಯಾಗಿ ಇಡಬೇಕು (ಸೀರೆ,ಬಟ್ಟೆಯ ತುಂಡುಗಳು,ಇತ್ಯಾದಿ.). ಖಾಖಾದಂತೆ ಏಕರೂಪತೆ ಮತ್ತು ಅನುರೂಪತೆಗಾಗಿ ಜಾಡಿನ ಪರದೆಯಾಗಿ ನಮೂನೆಯನ್ನು ಮಾಡಲಾಗುತ್ತದೆ. ಒಂದು ದ್ರವರೂಪದ ಗುರುತಿಸುವ ಮಿಶ್ರಣದೊಡನೆ (ಸೀಮೆ ಎಣ್ಣೆ ಮತ್ತು ಗಾಲಿಪುಡಿ) ನಮೂನೆಯನ್ನು ಗುರುತಿಸಲಾಗುತ್ತದೆ, ಅದು ಇಚ್ಛಿಸಿದ ನಮೂನೆಯನ್ನು ಪಡೆಯಲು ವಿಭಿನ್ನ ಹೊಲಿಗೆಗಳೊಂದಿಗೆ ನಮೂನೆಯನ್ನು ಸುಂದರವಾಗಿ ಕಸೂತಿಗೊಳಿಸಲಾಗಿರಬಹುದು.

ಗುಂಡಿಯ ರಂಧ್ರದಂತಹ ಹೊಲಿಗೆಯ ಸಹಾಯದಿಂದ ಬಟ್ಟೆಗೆ ಸಣ್ಣ ವೃತ್ತಾಕಾರದ ದರ್ಪಣಗಳನ್ನು ಹೆಣೆಯುವ ಮೂಲಕ ಕಸೂತಿವಿನ್ಯಾಸಗಳನ್ನು ತಯಾರಿಸಲಾಗುತ್ತದೆ, ಹಾಗೂ ಕೈಯಿಂದ ಬಾಹ್ಯರೇಖೆಯನ್ನು ಎಳೆಯಲಾಗುತ್ತದೆ.

ಕಾಂಡ ಅಥವಾ ಹೆರ್ರಿಂಗ್ಬೋನಿನಲ್ಲಿನ ಹೊಲಿಗೆಗಳಿಗಾಗಿ ರೇಷ್ಮೆಯ ದಾರವನ್ನು ಉಪಯೋಗಿಸಲಾಗುತ್ತದೆ. ಹೂವುಗಳು ಮತ್ತು ಬಳ್ಳಿಗಳ ವಿನ್ಯಾಸಗಳನ್ನು ಒಂದು ಕಪ್ಪಗಿನ ಹಿನ್ನೆಲೆಯಲ್ಲಿ ಹಾಕಲಾಗುತ್ತದೆ.

ಟೆಚ್ನಿಕುಎಸ್:-

ಸಮುದಾಯ ಮತ್ತು ಪ್ರದೇಶಗಳ ನಡುವೆ ತಾಂತ್ರಿಕತೆಗಳು ಬದಲಾಗಬಹುದು. ಕಸೂತಿಕೆಲಸ ಎಂಬ ಪದವು ಸಾಮಾನ್ಯವಾಗಿ, ಒಂದು ತುಂಡು ಬಟ್ಟೆಯನ್ನು ಸೂಜಿಗೆಲಸ ಅಥವಾ ಸುಂದರ ವಿವರಗಳೊಂದಿಗೆ ಅಲಂಕೃತಗೊಳಿಸುವ ವಿಧಾನವೆಂದು ಕರೆಯಬಹುದು. ಹೀಗೆ ಕಸೂತಿಕೆಲಸವನ್ನು ಸೂಜಿ ಮತ್ತು ದಾರಗಳಿಂದ ಬಟ್ಟೆಗಳನ್ನು ಅಲಂಕರಿಸುವ ಒಂದು ಕಲೆ ಎಂದು ಕರೆಯಬಹುದು. ಇದು ಯಾಂತ್ರಿಕ ಮತ್ತು ಕರ ಕಸೂತಿ ವಿಧಾನಗಳನ್ನು ಸಹ ಒಳಗೊಂಡಿದೆ ಮತ್ತು ಇಂದಿಗೂ ಕೂಡ, ಕರಕಸೂತಿ ಕೆಲಸವು ತುಂಬಾ ದುಬಾರಿಯಾಗಿ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ವಿಧಾನವಾಗಿ ಮುಂದುವರೆದಿದೆ. ಆದರೂ, ಅದರಲ್ಲಿರುವ ಸೂಕ್ಷ್ಮ ಕೈಗೆಲಸದ ಕಾರಣಕ್ಕಾಗಿ ಇದನ್ನು ಹೆಚ್ಚಿಗೆ ಆಯ್ದುಕೊಳ್ಳುತ್ತಾರೆ.

ಒಬ್ಬ ಕಸೂತಿ ಕೆಲಸದವನು ಉಪಯೋಗಿಸುವ ಸಾಮಾನ್ಯ ತಾಂತ್ರಿಕತೆಗಳೆಂದರೆ:-

1. ಅಡ್ಡ ಹೊಲಿಗೆ

2. ಅಣ್ಣೆನೂಲಿನಗೆಲಸ

3. ಹಚ್ಚಡದ ಕೆಲಸ

ಹೌ ಟು ರೆಅಚ್:-

300 ಕಿ.ಮೀ.ಗಳ ದೂರದಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣವು, ನಗರಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬಳ್ಳಾರಿ ಮತ್ತು ಜಿಂದಾಲ್, ತೋರನಗಲ್ಲುಗಳಲ್ಲಿ ವಾಯು ಪಥಗಳು ಲಭ್ಯವಿವೆ. ಬಳ್ಳಾರಿಯು ಬೆಂಗಳೂರು, ರಾಯಚೂರು, ತಿರುಪತಿ, ಹುಬ್ಬಳ್ಳಿ, ಗುಂಟಕಲ್ಲು, ವಿಜಯವಾಡ ಇತ್ಯಾದಿಗಳಿಗೆ ಉತ್ತಮ ರೈಲಿನ ಸಂಪರ್ಕ ಹೊಂದಿದೆ. ಬಳ್ಳಾರಿಯ ಬಳಿಯಿರುವ ಗುಂಟಕಲ್ಲು ಪ್ರಮುಖ ಜಂಕ್ಷನ್ನುಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಬಹಳಷ್ಟು ರೈಲುಗಳ ಸಂಪರ್ಕವಿದೆ. ಈ ಜಂಕ್ಷನ್ನಿನಿಂದ ದೆಹಲಿ, ಚೆನ್ನೈ, ಮುಂಬೈ ಮತ್ತು ಭಾರತದ ಇತರ ಪ್ರಮುಖ ಸ್ಥಳಗಳಿಗೆ ರೈಲುಗಳು ಲಭ್ಯವಿವೆ. ಬಳ್ಳಾರಿ ನಗರವು ಎಲ್ಲಾ ಪ್ರಮುಖ ನಗರಗಳು, ಪಟ್ಟಣಗಳು ಮತ್ತು ಪಕ್ಕದ ರಾಜ್ಯಗಳ ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.








ಕರ್ನಾಟಕ     ಬಳ್ಳಾರಿ     ಸಂಡೂರು ಕುಶಲ ಕಲಾ ಕೇಂದ್ರ